ಕರಿಮಣಿ ಮಾಂಗಲ್ಯದ ಮಹತ್ವ

0Shares

ಹಿಂದೂ ಮದುವೆಗಳಲ್ಲಿ ತಾಳಿ ಕಟ್ಟುವಾಗ ಒಂದು ಶ್ಲೋಕ ಕೇಳಿ ಬರೋದು ಸರ್ವೇ ಸಾಮಾನ್ಯ:

ಮಾಂಗಲ್ಯಂ ತಂತುನಾನೇನ ಮಮ ಜೀವನ ಹೇತುನಾ |
ಕಂಠೇ ಬಧ್ನಾಮಿ ಸುಭಗೇ ಸಂಜೀವ ಶರದಃ ಶತಮ್ ||
(ಕೆಲವರು ‘ಸಂಜೀವ’ ಬದಲು ‘ತ್ವಂ ಜೀವ’ ಅಂತಾರೆ)
ಆದರೆ ಸಾಮಾನ್ಯವಾಗಿ ಇದರ ಅರ್ಥ ಯಾರಿಗೂ ಗೊತ್ತಿರಲ್ಲ. ಪುರೋಹಿತರು ಇದನ್ನ ಹೇಳಿಬಿಟ್ರೆ ಸಾಕು ಅನ್ನೋರೇ ಹೆಚ್ಚು. ತಾಳಿ ಕಟ್ಟೋರು, ಕಟ್ಟಿಸಿಕೊಳೋರು, ಕಟ್ಟಿಸೋರು ಎಲ್ಲರೂ ಈ ಮುಖ್ಯವಾದ ಶ್ಲೋಕಾನ ಅರ್ಥ ಮಾಡ್ಕೊಂಡ್ರೆ ಒಳ್ಳೇದು.

ಸಂಸ್ಕೃತದಲ್ಲಿ ಈ ಶ್ಲೋಕದ ಅನ್ವಯ ಹೀಗೆ ಮಾಡಬಹುದು:
(ಹೇ) ಸುಭಗೇ ಓ ಪ್ರೀತಿಪಾತ್ರಳೇ ಮಮ ನನ್ನ ಜೀವನ ಹೇತುನಾ ಜೀವನಹೇತುವಾಗಿರುವ, ಬದುಕಿಗೊಂದು ಮುಖ್ಯವಾದ ಕಾರಣವಾಗಿರುವ ಅನೇನ ಈ ತಂತುನಾ ನೂಲಿನಿಂದ ಕಂಠೇ ಕುತ್ತಿಗೆಗೆ ಮಾಂಗಲ್ಯಂ ಮಾಂಗಲ್ಯವನ್ನು ಬಧ್ನಾಮಿ ಕಟ್ಟುವೆ ಶತಂ ನೂರು ಶರದಃ ಶರದೃತುಗಳು, ವರ್ಷಗಳು ಸಂಜೀವ ಚೆನ್ನಾಗಿ ಬಾಳು (ತ್ವಂ ಜೀವ ಎನ್ನುವುದಾದರೆ ನೀನು ಬಾಳು ಎಂದಷ್ಟೇ ಆಗುತ್ತದೆ).

ಅಂದ್ರೆ ಒಟ್ನಲ್ಲಿ ಅರ್ಥ ಹೀಗಾಯಿತು:
ಓ ಪ್ರೀತಿಪಾತ್ರಳೇ, ನನ್ನ ಜೀವನಹೇತುವಾಗಿರುವ, ಬದುಕಿಗೊಂದು ಮುಖ್ಯವಾದ ಕಾರಣವಾಗಿರುವ, ಈ ನೂಲಿನಿಂದ ಕುತ್ತಿಗೆಗೆ ಮಾಂಗಲ್ಯವನ್ನು ಕಟ್ಟುವೆ; ನೂರು ವರ್ಷ ಚೆನ್ನಾಗಿ (ನನ್ನೊಡನೆ) ಬಾಳು! ಇದನ್ನ ಮದುವೆ ಗಂಡು (ಮಾತ್ರ) ಹೆಣ್ಣಿಗೆ (ಮಾತ್ರ) ಹೇಳಬೇಕು.

ಕರಿಮಣಿ ಮಾಂಗಲ್ಯ

ಮಂಗಳಸೂತ್ರ:

ಅ. ಮಂಗಳಸೂತ್ರದ ಬಟ್ಟಲುಗಳು ಹೇಗಿರಬೇಕು ?
ಮಂಗಳಸೂತ್ರದ ಬಟ್ಟಲುಗಳು ಗೋಲಾಕಾರವಾಗಿರಬೇಕು ಮತ್ತು ಅವುಗಳ ಮೇಲೆ ಯಾವುದೇ ವಿನ್ಯಾಸವಿರಬಾರದು.

ಆ. ಗೋಲಾಕಾರ ಬಟ್ಟಲುಗಳ ಮಹತ್ವ
೧. ಗೋಲಾಕಾರವು ಶೂನ್ಯ, ಅಂದರೆ ಟೊಳ್ಳಿರುವ ಬ್ರಹ್ಮನಿಗೆ ಸಂಬಂಧಿಸಿರುವುದರಿಂದ ಜೀವದ ಅವಶ್ಯಕತೆಗನುಸಾರ ಆಯಾಯ ಸ್ತರದಲ್ಲಿನ ಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಇತರ ಆಕಾರಗಳಿಗಿಂತ ಹೆಚ್ಚಿರುತ್ತದೆ.
ಆದುದರಿಂದ ಗೋಲಾಕಾರವನ್ನು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಲಾಗುತ್ತದೆ.
೨. ಗೋಲಾಕಾರವು (ಗೋಲವು) ಜ್ಞಾನಶಕ್ತಿಯ ಪ್ರತೀಕವಾಗಿದೆ.
೩. ಗೋಲಾಕಾರವು ಶಿವ-ಶಕ್ತಿಯರ ಸತ್ತ್ವಗುಣಕ್ಕೆ ಸಂಬಂಧಿಸಿದೆ.
೪. ಗೋಲಾಕಾರದ ಮಧ್ಯಬಿಂದುವು ಆಘಾತಾತ್ಮಕ ಶಕ್ತಿರೂಪೀ ಲಹರಿಗಳನ್ನು ಪ್ರದಾನಿಸುವುದಾಗಿದ್ದರೆ, ಬಾಹ್ಯಗೋಲವು ಶಿವರೂಪಿ ಬ್ರಹ್ಮನಿಗೆ ಸಂಬಂಧಿಸಿದೆ. –
(ಪೂ. (ಸೌ.) ಅಂಜಲಿ ಗಾಡಗೀಳ ಓರ್ವ ವಿದ್ವಾಂಸ ಅಂಕಿತನಾಮದಿಂದ ಬರೆಯುತ್ತಾರೆ. ಮಾರ್ಗಶಿರ ಕೃಷ್ಣ ಅಷ್ಟಮಿ, ಕಲಿಯುಗ ವರ್ಷ ೫೧೧೦ (೨೭.೧೦.೨೦೦೬))

ಕರಿಮಣಿ ಮಾಂಗಲ್ಯದ ಮಹತ್ವ:

ಕರಿಮಣಿ ಸರವನ್ನು ಧರಿಸುವುದರಿಂದ ಆಗುವ ಪ್ರಯೋಜನವೇನು?

ಕರಿಮಣಿ ಸರ

ಮಾಂಗಲ್ಯ ಧರಿಸುವುದು ಕೇವಲ ಪ್ರದರ್ಶನಕ್ಕಲ್ಲ, ಅದಕ್ಕೆ ವಿಶೇಷ ಹಿನ್ನೆಲೆ ಇದೆ. ಹಿಂದೂ ಧರ್ಮದಲ್ಲಿ ಮದುವೆ-ಮುಂಜಿ ಹೀಗೆ ಹಲವು ಸಂಪ್ರದಾಯಕ್ಕೆ ಎಷ್ಟು ಮಹತ್ವ ಇದೆಯೇ ಅದೇ ರೀತಿ, ವರ-ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ ಅಷ್ಟೇ ಪಾಮುಖ್ಯತೆ ಇದೆ. ಮದುವೆಯ ಸಾಂಕೇತವಾಗಿ ಸ್ತ್ರಿಯರಿಗೆ ಕರಿಮಣಿ ತಾಳಿ, ಕುಂಕುಮ, ಗಾಜಿನ ಬಳೆ, ಕಾಲುಂಗರ, ಹೂವು ನೀಡಲಾಗುವುದು ಅದು ಗೃಹಿಣಿಗೆ ಸೌಭಾಗ್ಯಕರವಾದವು.

ಮಂಗಳ ಸೂತ್ರ, ತಾಳಿ, ಕಂಠಿ, ಕರಿಮಣಿ ಇತ್ಯಾದಿ ವಿವಿಧ ಹೆಸರುಗಳಿರುವ, ಅತಿ ಪಾವಿತ್ರ್ಯದ, ಅತ್ಯಂತ ಭಾವನಾತ್ಮಕವಾದ ಆಭರಣವಿದೆಯಲ್ಲ – ಅದರಲ್ಲಿ ಮಾಂಗಲ್ಯ ಯಾವುದು? ಮಾಂಗಲ್ಯ ಧಾರಣದ ಸಂಪ್ರದಾಯ ಹೇಗೆ ಬಂತು? ಬಂಗಾರದ ಒಡವೆಯಲ್ಲಿ ಕರಿಮಣಿಗಳೇಕೆ? ಕರಿಮಣಿಸರದಲ್ಲಿ ಹವಳವೇಕೆ? ಎಂಬುದನ್ನು ನೋಡೋಣ.

  • ಆದಿಶಂಕರರು ರಚಿಸಿದ ಸೌಂದರ್ಯ ಲಹರಿಯಲ್ಲಿ, ಶಿವನು ಪಾರ್ವತಿಗೆ ಮಂಗಲ ಸೂತ್ರವನ್ನು ಕಟ್ಟಿದನೆಂದಿದೆ.
  • ಲಲಿತಾ ಸಹಸ್ರನಾಮ, ಸೌಂದರ್ಯ ಲಹರಿಗಳು ಚಾಲ್ತಿಯಿರುವ ಸ್ತೋತ್ರಗಳಾಗಿದ್ದು ಮಾಂಗಲ್ಯ ಧಾರಣವನ್ನು ಪ್ರಸ್ತಾಪಿಸಿವೆ.
  • ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳದಿರಲೆಂದೇ ಮಂಗಳ ಸೂತ್ರದಲ್ಲಿ ಕಪ್ಪು ಬಣ್ಣದ ಮಣಿಗಳಿರುವುದು ಎಂಬ ನಂಬಿಕೆಯಿದೆ.
  • ಕಪ್ಪು ಮಣಿಗಳಿಗೆ ಋಣಾತ್ಮಕ ಶಕ್ತಿಕ್ಷೇತ್ರವನ್ನೆಲ್ಲ ಹೀರಿ ಕೊಂಡು ಅದು ವಧುವನ್ನು ಮತ್ತು ಅವಳ ಕುಟುಂಬವನ್ನು ತಗಲದಂತೆ ಮಾಡುವ ಗುಣವಿರುತ್ತದೆ.
  • ಕರಿಮಣಿಗಳನ್ನು ಒಂದೊಂದಾಗಿ ಪೋಣಿಸಿದಾಗ ಅದೊಂದು ಸುಂದರ ಸರಮಾಲೆ ಆಗುವುದನ್ನು, ಗಂಡಿನ ಕುಟುಂಬವೆಂಬ ಸೂತ್ರದೊಂದಿಗೆ ನವವಿವಾಹಿತ ಹೆಣ್ಣು ಅಷ್ಟೇ ಸುಲಲಿತವಾಗಿ ಹೊಂದಿ ಕೊಳ್ಳ ಬೇಕು/ ಹೊಂದಿ ಕೊಳ್ಳುತ್ತಾಳೆ ಎಂಬ ಆಶಯಕ್ಕೆ ಹೋಲಿಸುತ್ತಾರೆ.
  • ಕರಿಮಣಿ ಸರದ ಮತ್ತೊಂದು ವೈಶಿಷ್ಟ್ಯ ಏನೆಂದರೆ ಎದೆಯ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿ ಕೊಳ್ಳುತ್ತದೆ.
  • ಇದರ ಅತಿ ಮುಖ್ಯವಾದ ಉಪಯುಕ್ತತೆ ಹಾಲುಣಿಸುವ ತಾಯಿಯಲ್ಲಿ ಎದೆ ಹಾಲಿನ ಉಷ್ಣತೆಯನ್ನು ಹೀರಿ ಕೊಂಡು ಎದೆ ಹಾಲು ಕೆಡದಂತೆ ಶಿಶುವಿಗೆ ಉಣ್ಣಲೂ ಅನುಕೂಲವಾದ ಸಮ ಉಷ್ಣತೆಯಲ್ಲಿರಿಸಲು ಸಹಾಯ ಮಾಡುತ್ತದೆ.

ಮಂಗಳ ಸೂತ್ರ ಅಥವಾ ತಾಳಿಯಲ್ಲಿ ಪ್ರಾದೇಶಿಕವಾಗಿ, ಮತ- ಪಂಥಗಳಿಗೆ ಅನುಸಾರವಾಗಿ ಅಲ್ಪಸ್ವಲ್ಪ ವ್ಯತ್ಯಾಸಗಳೂ ಕಂಡು ಬರುತ್ತವೆ. ಬ್ರಾಹ್ಮಣ ವರ್ಗದಲ್ಲಿ ಎರಡು ಪದಕಗಳ ತಾಳಿ, ಕಾಯಸ್ಥ / ಮರಾಠಾ ಸ್ತ್ರೀಯರಿಗೆ ಒಂದು ಪದಕದ ತಾಳಿ, ವೈಶ್ಯ ಮತ್ತು ಚಿನಿವಾರ ಪಂಗಡಗಳಲ್ಲಿ ಚಿನ್ನ ವಜ್ರ, ವೈಢೂರ್ಯಗಳಿರುವ ತಾಳಿ – ಹೀಗೆ ವೈವಿಧ್ಯಗಳು. ವೀರಶೈವ ಸ್ತ್ರೀಯರು ತಾಳಿಯೊಂದಿಗೇ ಲಿಂಗದ ಕರಂಡಕವನ್ನು ಕಟ್ಟಿ ಕೊಳ್ಳುವುದೂ ಇದೆ. ದಕ್ಷಿಣ ಭಾರತದಲ್ಲಿ ಹಿಂದುಗಳಷ್ಟೇ ಅಲ್ಲದೆ ಕ್ರಿಶ್ಚಿಯನ್‌ ಮತ್ತು ಮುಸ್ಲಿಂ ಮತಸ್ಥ ಸ್ತ್ರೀಯರೂ ವಿವಾಹದ ನಂತರ ತಾಳಿ/ ಕರಿಮಣಿ ಸರ ಧರಿಸುತ್ತಾರೆ. ಗೃಹಿಣಿಯರು ಇಂದು ಸೌಭಾಗ್ಯಕರವಾದ ಇವುಗಳನ್ನು ಧರಿಸುವುದರಲ್ಲಿ ಆಸಕ್ತಿ ವಹಿಸುತ್ತಿಲ್ಲ. ಕೆಲವರು ಕರಿಮಣಿಯನ್ನು ಆಗಾಗ ಬಿಚ್ಚಿಟ್ಟು ಹೊರಗೆ ಹೋಗುವಾಗ ಧರಿಸುತ್ತಿದ್ದಾರೆ. ಆದರೆ ಅವುಗಳಿಗಿರುವ ಮಹತ್ವವನ್ನು, ಸಂಪ್ರದಾಯವನ್ನು ಎತ್ತಿ ಹಿಡಿಯುವ ಗೌರವಾರ್ಹ ಆಗುವಂತಹ ಮಂಗಳಕರ ಆಭರಣಗಳನ್ನು ಧರಿಸುವುದರಿಂದ ನಾರಿಯು ಪೂಜನೀಯಳು ಆಗುತ್ತಾಳೆ.

ಜ್ಯೋತಿಷ್ಯ ಶಾಸ್ತ್ರ ಗ್ರಂಥಗಳಲ್ಲಿ ಯಾವ ರಾಶಿಯವರು ಎಷ್ಟೆಷ್ಟು ಕರಿಮಣಿಯನ್ನು ಸರದಲ್ಲಿ ಹಾಕಿ ಕೊಳ್ಳ ಬೇಕೆಂಬುದನ್ನು ಉಲ್ಲೇಖಿಸಲಾಗಿದೆ.

ರಾಶಿಗಳಿಗೆ ಕರಿಮಣಿಗಳ ಸಂಖ್ಯೆ:

ಮೇಷ ರಾಶಿಗೆ – 21 ಮಣಿಗಳು.
ವೃಷಭ ರಾಶಿಗೆ – 40 ಮಣಿಗಳು.
ಮಿಥುನ ರಾಶಿಗೆ – 34 ಮಣಿಗಳು.
ಕಟಕ ರಾಶಿಗೆ – 20 ಮಣಿಗಳು.
ಸಿಂಹ ರಾಶಿಗೆ – 18 ಮಣಿಗಳು.
ಕನ್ಯಾ ರಾಶಿಗೆ – 34 ಮಣಿಗಳು.
ತುಲಾ ರಾಶಿಗೆ – 40 ಮಣಿಗಳು.
ವೃಶ್ಚಿಕ ರಾಶಿಗೆ – 21 ಮಣಿಗಳು.
ಧನುಸ್ಸು ರಾಶಿಗೆ – 32 ಮಣಿಗಳು.
ಮಕರ ರಾಶಿಗೆ – 38 ಮಣಿಗಳು.
ಕುಂಭ ರಾಶಿಗೆ – 38 ಮಣಿಗಳು.
ಮೀನ ರಾಶಿಗೆ – 32 ಮಣಿಗಳು.

ಪ್ರತಿ ಹೆಣ್ಣಿನ ಆಶಯ ತಾನು ಸುಮಂಗಲಿಯಾಗಿ ಬಾಳಬೇಕೆಂಬುದು. ಮದುವೆ ಎಂಬುದು ಪವಿತ್ರ ಬಂಧನ. ದಿನ‌ ಬೆಳಿಗ್ಗೆ ಎದ್ದ ತಕ್ಷಣ ತಾಯಿ ಪಾರ್ವತಿಯನ್ನು ನೆನೆಸಿ ಪ್ರಾರ್ಥಿಸಿ ಏಕೆಂದರೆ ಪಾರ್ವತಿಯು ಅರಿಶಿನ ಕುಂಕುಮ ಶೋಭಿತೆಯ ಪ್ರತಿರೂಪ. ಮಂಗಳ ಸೂತ್ರವನ್ನು ಎಂದಿಗೂ ಯಾರಿಗೂ ಕಾಣದ ಹಾಗೆ ನೋಡಿಕೊಳ್ಳಿ ಏಕೆಂದರೆ ಅದು ಸಪ್ತ ಜನ್ಮಗಳ ಗಂಟು ಅದಕ್ಕೆ ಕೆಟ್ಟ ಶಕುನಗಳು ತಾಕಬಾರದು.
ನಿಮ್ಮ‌ಇಷ್ಟ ದೇವಿಗೆ ಪೂಜೆ ಮಾಡಿಸಿ ಐದು ಜನ ಮುತ್ತೈದೆಯರಿಗೆ ಬಾಗಿನ ನೀಡಿರಿ ಈ ಪೂಜೆ ಸಾಕ್ಷತ್ ಮಹಾದೇವಿಗೆ ಅರಿಶಿನ ಕುಂಕುಮ‌ ಕೊಟ್ಟು ನಿಮ್ಮ‌ ಸುಮಂಗಲಿತನ ಸಾಯುವರೆಗೂ ಇರಲಿ ಎಂದು ಅಶಿರ್ವಾದ ಪಡೆದಂತೆ ಸರಿ. ಎಲ್ಲದಂಕ್ಕಿಂತ ಮುಖ್ಯ ಆಧುನಿಕತೆಯ ಸುಳಿಗೆ ನಿಮ್ಮ ತಾಳಿಯನ್ನು ಯಾವಾಗ ಅಂದರೆ ಅವಾಗ ತೆಗೆಯಬೇಡಿ.

ಕೆಲ ಮಹಿಳೆಯರು ಗೊತ್ತೋ ಗೊತ್ತಿಲ್ಲದೋ ಮಂಗಳ ಸೂತ್ರಕ್ಕೆ ಸೇಫ್ಟಿ ಪಿನ್ ಅನ್ನು ಇಟ್ಟುಕೊಳ್ಳುತ್ತಾರೆ. ಇದರಿಂದ ಸೇಫ್ಟಿ ಪಿನ್ ನಲ್ಲಿರುವ ಕಬ್ಬಿಣ ಅಂಶ ಮಂಗಳ ಸೂತ್ರದಲ್ಲಿ ಋಣಾತ್ಮಕ ಶಕ್ತಿಯನ್ನು ಸೆಳೆದುಕೊಳ್ಳುತ್ತದೆ. ಹಾಗಾಗಿ ಅದರಲ್ಲಿ ಒಳ್ಳೆಯ ಶಕ್ತಿಗಳನ್ನು ಸೆಳೆದು ಮಂಗಳ ಸೂತ್ರವನ್ನು ಬಲಹೀನತೆ ಮಾಡುತ್ತದೆ. ಇದರಿಂದ ಗಂಡನ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆಗಳಿದ್ದು ಅವರ ದಾಂಪತ್ಯ ಜೀವನದಲ್ಲಿ ಕಲಹಗಳು ಉಂಟಾಗುತ್ತದೆ.

ಮಂಗಳ ಸೂತ್ರವನ್ನು ಒಂದು ವೇಳೆ ಬದಲಾಯಿಸಬೇಕಿದ್ದರೆ ಮೊದಲು ಅರಿಶಿಣ ದಾರದಲ್ಲಿ ಅರಿಶಿಣ ಕೊಂಬನ್ನು ಕಟ್ಟಿ ಕುತ್ತಿಗೆಗೆ ಕಟ್ಟಿಕೊಂಡ ನಂತರವೇ ಮಂಗಳ ಸೂತ್ರವನ್ನು ತೆಗೆಯಬೇಕು. ಮಂಗಳ ಸೂತ್ರವನ್ನು ಮಂಗಳವಾರ ಮತ್ತು ಶುಕ್ರವಾರ ದಿನಗಳಲ್ಲಿ ಬದಲಾಯಿಸಬಾರದು. ಕೇವಲ ಬುಧವಾರ ಮತ್ತು ಗುರುವಾರದ ದಿನಗಳಲ್ಲಿ ಮಾತ್ರ ಬದಲಾಯಿಸಬೇಕು. ಮಂಗಳ ಸೂತ್ರವನ್ನು ಸಂಜೆಯ ವೇಳೆಯಲ್ಲಿ ಬದಲಾಯಿಸಬಾರದು. ಒಳ್ಳೆಯ ದಿನ ಮತ್ತು ಒಳ್ಳೆಯ ಸಮಯದಲ್ಲಿ ಬದಲಾಯಿಸಬೇಕು. ಕೆಲ ಮಹಿಳೆಯರು ಸ್ನಾನದ ಮುಂಚೆ ಮತ್ತು ಮಲಗುವ ಮುಂಚೆ ಮಂಗಳ ಸೂತ್ರವನ್ನು ತೆಗೆಯುತ್ತಾರೆ. ಹೀಗೆ ಮಾಡಿದರೆ ತುಂಬಾ ಅಪಚಾರ ಮಾಡಿದಂತೆ ಎಂದು ಅರ್ಥ. ದುಷ್ಟ ಶಕ್ತಿಗಳಿಂದ ಸಂಸಾರವನ್ನು ರಕ್ಷಿಸಿಕೊಳ್ಳಲು ಶಕ್ತಿ ಸ್ವರೂಪಿಯಾದ ಸ್ತ್ರೀಯರ ಕುತ್ತಿಗೆಯಲ್ಲಿ ಮಂಗಳ ಸೂತ್ರವು ಇರಲೇಬೇಕು.ತನ್ನ ಗಂಡನ ಆಯಸ್ಸು ಹೆಚ್ಚಿಸುವ ಶಕ್ತಿ ಮಂಗಳ ಸೂತ್ರದಲ್ಲಿ ಇರುತ್ತದೆ ಎಂದು ನಂಬಿದ್ದಾರೆ. ಮಂಗಳ ಸೂತ್ರ ಎಂದರೆ ಒಂದು ಪವಿತ್ರ ಸಂಬಂಧಕ್ಕೆ ಒಳಗಾಗಿರುವವರು ಎಂದು ಅರ್ಥ. ಮಂಗಳ ಎಂದರೆ ಶುಭ, ಸೂತ್ರ ಎಂದರೆ ದಾರ ಎಂದು ಅರ್ಥ.

ಸರ್ವಜನ ಸುಖಿನೋಭವಂತು

0Shares

Leave a Reply

error: Content is protected !!