ದೀಪಾವಳಿ ಸಮಯದಲ್ಲಿ ಆಚರಿಸಲಾಗುವ ವಿಶೇಷ ಸಂಪ್ರದಾಯಗಳಲ್ಲಿ ನೀರು ತುಂಬುವ ಹಬ್ಬ ಕೂಡ ಒಂದು. ಬಹಳ ಹಿಂದಿನಿಂದಲೂ ಸಾಗುತ್ತಿರುವ ಈ ಆಚರಣೆ, ಆಶ್ವಯುಜ ಮಾಸದ ಕೃಷ್ಣ ಪಕ್ಷದ ಶುದ್ಧ ತ್ರಯೋದಶಿಯಂದು ನಡೆಯುತ್ತದೆ. ದಕ್ಷಿಣ ಭಾರತದಲ್ಲಿ ಇದನ್ನು “ನೀರು ತುಂಬುವ ಹಬ್ಬ” ಎಂದರೆ, ಉತ್ತರ ಭಾರತದಲ್ಲಿ ಇದನ್ನು ಧನತೇರಸ್ ಅಥವಾ ಧನತ್ರಯೋದಶಿ ಎಂದು ಕರೆಯಲಾಗುತ್ತದೆ.
🌊ನೀರು ತುಂಬುವ ಹಬ್ಬದ ಆಚರಣೆಯ ವಿಧಾನ:
-
- ಸಂಧ್ಯಾಕಾಲದಲ್ಲಿ ಸ್ನಾನಗ್ರಹವನ್ನು ಚೆನ್ನಾಗಿ ಸ್ವಚ್ಛಗೊಳಿಸಿ.
- ಸ್ನಾನಗ್ರಹದಲ್ಲಿರುವ ನೀರಿನ ಬಾಂಡಗಳನ್ನು ತೊಳೆದು ಸುತ್ತಲೂ ರಂಗೋಲಿ ಅಥವಾ ಮಂಡಲ ಬಿಡಿಸಿ, ಹೂವಿನಿಂದ ಅಲಂಕರಿಸಿ ಹಣತೆಯಲ್ಲಿ ದೀಪ ಹಚ್ಚಿ.
- ಈ ಸಂದರ್ಭದಲ್ಲಿ ಕೆಳಗಿನ ಮಂತ್ರವನ್ನು ಹೇಳುತ್ತಾ ಬಾವಿಯಿಂದ ನೀರನ್ನು ತಂದು ಪಾತ್ರೆಗೆ ಜಲಪೂರಣ ಮಾಡಬೇಕು.
ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ಭಾಗೀರಥೀಂ ಆವಾಹಯಾಮಿ |
🔸 ಅರ್ಥ: ಗಂಗೆ, ಯಮುನೆ, ಗೋದಾವರಿ, ಸರಸ್ವತಿ, ನರ್ಮದೆ, ಸಿಂಧು, ಕಾವೇರಿ – ಈ ಎಲ್ಲ ಪವಿತ್ರ ನದಿಗಳೇ, ದಯವಿಟ್ಟು ಈ ನೀರಿನಲ್ಲಿ ಸನ್ನಿಧಾನ ವಹಿಸಿ ನನ್ನ ಸ್ನಾನವನ್ನು ಪವಿತ್ರಗೊಳಿಸಿ.
- ನಂತರ “ಪ್ರಸೀದ ಭಗವನ್ ಆಗಚ್ಚಾಗಚ್ಛ ಭಗವಂತಂ ಗಂಗಾಜನಕಂ ತ್ರಿವಿಕ್ರಮಂ ಅಸ್ಮಿನ್ ಕಲಶೇ ಆವಾಹಯಾಮಿ” ಎಂದು ಜಪಿಸಿ, ಅಕ್ಷತೆ, ಹೂವು, ಹಳದಿ, ಕುಂಕುಮದಿಂದ ಪೂಜೆ ಮಾಡಬೇಕು.
- ನೈವೇದ್ಯವನ್ನು ಸಮರ್ಪಿಸಿ, ನೀರಾಜನ ನೀಡಿ ಪೂಜೆ ಪೂರ್ಣಗೊಳಿಸಬೇಕು.
🍃 ವಿಶೇಷ ನೈವೇದ್ಯ – ಎಲೆ ಅಪ್ಪ (ಎರೆ ಅಪ್ಪ):
ಈ ಹಬ್ಬದಂದು ದಕ್ಷಿಣ ಕನ್ನಡ ಹಾಗೂ ಉಡುಪಿಯಂತಹ ಕರಾವಳಿ ಪ್ರದೇಶದಲ್ಲಿ ನೈವೇದ್ಯಕ್ಕೆ ಎಲೆ ಅಪ್ಪ (ತುಳುವಿನಲ್ಲಿ ಎರೆ ಅಪ್ಪ) ತಯಾರಿಸಲಾಗುತ್ತದೆ. ಇದು ಪವಿತ್ರತೆಯ ಪ್ರತೀಕವಾಗಿದೆ ಮತ್ತು ಸಂಪ್ರದಾಯದ ಅಂಶವಾಗಿ ಪ್ರತಿಷ್ಠಿತವಾಗಿದೆ.
🎊 ನೀರು ತುಂಬುವ ಹಬ್ಬ, ದೀಪಾವಳಿಗೆ ನಿಜವಾದ ಆದ್ಯತೆ ನೀಡುವ ಪವಿತ್ರ ಆರಂಬ. ಆಧ್ಯಾತ್ಮ, ಶುದ್ಧತೆ ಮತ್ತು ಸಂಸ್ಕೃತಿಯ ಸಂಗಮವಾದ ಈ ಹಬ್ಬ ನಮ್ಮ ಸಂಪ್ರದಾಯದ ಸುಗಂಧವನ್ನು ಮನೆಮಾತು ಮಾಡುತ್ತದೆ.