ರಾಮ ನಾಮ ಪಾಯಸಕ್ಕೆ – ಸಾಹಿತ್ಯ

0Shares

ರಚನೆ: ಪುರಂದರದಾಸರು

ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ |
ವಿಠ್ಠಲನಾಮವ ತುಪ್ಪವ ಬೆರಸಿ ಬಾಯ ಚಪ್ಪರೀಸಿರೋ || ಪ ||

ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ |
ಸುಮ್ಮಾನೆ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ ಮಾಡಿರೋ || ೧ ||

ಹೃದಯವೆಂಬೊ ಪಾತ್ರದಲ್ಲಿ ಭಾವವೆಂಬ ಎಸರನಿಕ್ಕಿ |
ಬುದ್ಧಿಯಿಂದ ಪಾಕ ಮಾಡಿ ಅನಿರುದ್ಧ ಹರಿಯ ನೆನೆಯಿರೊ || ೨ ||

ಆನಂದೋ ಆನಂದವೆಂಬ ತೇಗು ಬಂತು ಕಾಣಿರೊ |
ಆನಂದ ಮೂರುತಿ ನಮ್ಮ ಪುರಂದರ ವಿಠ್ಠಲನ ನೆನೆಯಿರೊ || ೩ ||

Click here for English Lyrics

0Shares
See also  ಯಾರೇ ರಂಗನ ಕರೆಯ ಬಂದವರು - Yare Rangana Kareya Bandavaru Lyrics

Leave a Reply

error: Content is protected !!