0Shares

ರಚನೆ: ಜಗನ್ನಾಥದಾಸರು

ಪ್ರಾಣದೇವ ನೀನಲ್ಲದೆ ಕಾಯ್ವರ ಕಾಣೆನು ಜಗದೊಳಗೆ ಮುಖ್ಯ || ಪ ||
ಪ್ರಾಣಾಪಾನ ವ್ಯಾನೋದಾನ ಸಮಾನನೆನಿಪ ಮುಖ್ಯ || ಅ.ಪ ||

ವಾಸವ ಕುಲಿಶದಿ ಘಾಸಿಸೆ ಜೀವರ ತ್ರಾಸ ನಿರೋಧಿಸಿದೆ |
ಆ ಸಮಯದಿ ಕಮಲಾಸನ ಪೇಳಲು ನೀ ಸಲಹಿದೆ ಜಗವಾ || ೧ ||

ಅಂಗದ ಪ್ರಮುಖ ಪ್ಲವಂಗರು ರಾಮನ ಅಂಗನೆಯಳ ಹುಡುಕೆ |
ತಿಂಗಳು ಮೀರಲು ಕಂಗೆಡೆ ಕಪಿವರ ಪುಂಗವ ಪಾಲಿಸಿದೇ || ೨ ||

ಪಾವಿನ ಪಾಶದಿ ರಾವಣಿ ನೀಲ ಸುಗ್ರೀವ ಮುಖ್ಯರ ಬಿಗಿಯೇ |
ಸಾವಿರಗಾವುದ ದೂರದಲ್ಲಿದ ಸಂಜೀವನವ ತಂದೆ || ೩ ||

ಪರಿಸರ ನೀನಿರೆ ಹರಿತಾನಿಪ್ಪನು ಇರದಿರೆ ತಾನಿರನು |
ಕರಣ ನಿಯಾಮಕ ಸುರರ ಗುರುವೇ ನೀ ಕರುಣಿಸೆ ಕರುಣಿಸುವಾ || ೪ ||

ಭೂತೇಂದ್ರಿಯಂಗಳಧಿನಾಥ ನಿಯಾಮಕ ನಾತೈ ಜಸಹರನ |
ತಾತನೆನಿಪ ಜಗನ್ನಾಥ ವಿಠ್ಠಲನ ಪ್ರೀತಿ ಪಾತ್ರನಾದೆ || ೫ ||

Click here for English Lyrics

0Shares
See also  ಆಡುತ ಬಾರಮ್ಮ - ಸಾಹಿತ್ಯ

Shrinidhi Rao

Shrinidhi Rao is a Mechanical Design Engineer and part-time blogger from Belmar, Karnataka. Passionate about writing, he shares insights on various topics, combining creativity with technical expertise.

Leave a Reply